
26th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.25-ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹತ್ತಿರವಿರುವ ಗದ್ದನಕೇರಿ ಕ್ರಾಸ್ ವಲಯ ದಿನೇ ದಿನೇ ಬೆಳೆಯುತ್ತಿದ್ದು ಅದರ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ. ಜೆ.ಟಿ.ಪಾಟೀ¯ ಹೇಳಿದರು.
ಗುರುವಾರ ಗದ್ದನಕೇರಿ ಕ್ರಾಸ್ನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೀಳಗಿ ಮತಕ್ಷೇತ್ರದ ಅರಕೇರಿ, ಕೊಪ,್ಪ ಚಿಕ್ಕಾಲಗುಂಡಿ, ಸೋರಕೊಪ,್ಪ ಬನ್ನಿದಿನ್ನಿ, ಗದ್ದನಕೇರಿ ಕ್ರಾಸ್ ಹಾಗೂ ಮೂರನಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ತಮ್ಮ ಗ್ರಾಮಗಳಿಗೆ ನೀಡಿರುವ ಕಾಮಗಾರಿಗಳನ್ನು ತಾವೇ ಉಸ್ತುವಾರಿ ವಹಿಸಿಕೊಂಡು ಉತ್ತಮ ಗುಣಮಟ್ಟದ ಕಾರ್ಯವನ್ನು ನಿರ್ವಹಿಸಿಕೊಳ್ಳಬೇಕು ಎಂದು ಹೇಳಿದ ಜೆ.ಟಿ.ಪಾಟೀಲ, ಗದ್ದನಕೇರಿ ಕ್ರಾಸಿಗೆ ಬಸ್ ನಿಲ್ದಾಣ, ಆರೋಗ್ಯ ಕೇಂದ್ರ, ಮಾರುಕಟ್ಟೆ, ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿವೆ ಎಂದು ಹೇಳಿದರು.
ಗದ್ದನಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಸಂಗಪ್ಪ ನಾಲತ್ತವಾಡ, ಸದಸ್ಯರಾದ ಚಂದ್ರಶೇಖರ್ ಸಾಲಗುಂದಿ, ಸಂಭಾಜಿ ಕೊಕಾಟೆ, ಸಂಗಣ್ಣ ನಾಲತ್ತವಾಡ, ಅಹ್ಮದ್ ಕಿರಸೂರ, ಜಾವೇದ್ ಮುಜಾವರ, ಶೌಕತ್ತಲಿ ಪಗಡಿ, ಹುಸೇನ್ ಬಂದ್ಕೇರಿ, ಸಿದ್ದಣ್ಣ ಛಬ್ಬಿ, ಶಿವು ರಾಥೋಡ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಇದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ
ಕರ್ನಾಟಕ ಜಾನಪದ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ ವಿಜಯಕುಮಾರ್ ಸೋನಾರೆ ಆಯ್ಕೆ.